ಕನ್ನಡ ಜ್ಯೋತಿಷ್ಯ ಲೇಖನಗಳು ( Kannada jyotishya lekhanagalu )
ಜ್ಯೋತಿಷ್ಯದ ಬಗೆಗೆ ಈಗಾಗಲೇ ಸಾಕಷ್ಟು ಪುಸ್ತಕ ಗಳು,ಬರಹ ಗಳು ಲೇಖನಗಳು ಜಾತಕ ವಿಮರ್ಶೆಗಳು ಇವೆ, ಆದರೆ ಅವೆಲ್ಲಾ ಇಂಗ್ಲೀಷಿ ನಲ್ಲಿ, ಹಿಂದಿಯಲ್ಲಿ, ತಮಿಳಿನಲ್ಲಿ, ಇವೆ. ನಮ್ಮ ಪ್ರಾದೇಶಿಕ ಭಾಷೆಯಾದ ಕನ್ನಡ ದಲ್ಲಿ ಕೇವಲ ಬೆರಳೆಣಿಕೆಯಷ್ಟು ಮಾತ್ರ blog ಗಳು ಇರುವುದು. ವೇದಾಂಗ ಜ್ಯೋತಿಷ್ಯದ ಎಲ್ಲ ಮಾಹಿತಿಗಳು ಒಂದೇ ಸೂರಿನಡಿ ಸಿಗುತ್ತಿಲ್ಲ. ಆದಷ್ಟೂ ವಿಚಾರಾಗಳನ್ನು ತಿಳಿದುಕೊಳ್ಳ ಬೇಕೆಂಬ ತೃಷೆ ಇಯುವವರಿಗೆ, ಕನ್ನಡದಲ್ಲಿ ಅಂತರ್ಜಾಲ ಜ್ಯೋತಿಷ್ಯ ಮಾಹಿತಿಗಳು ಸಿಗುತ್ತಿರುವುದು ಅತ್ಯಲ್ಪ. ಹೀಗಾಗಿ ಸಾಗಾರದಷ್ಟಿರುವ ಜ್ಯೋತಿಷ್ಯ ವಿಚಾರಗಳನ್ನು ಹನಿ ಹನಿಯಾಗಿ ನಿಮ್ಮ ಮುಂದಿ ಡು ವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ
Thursday, 26 February 2026
ಕ್ರೀಡೆ ಮತ್ತು ಜ್ಯೋತಿಷ್ಯ
Monday, 21 July 2025
ನಕ್ಷತ್ರಗಳ ಬಗೆಗೆ ಅಧ್ಯಯನ
ಭೂಮಿ ಅಥವಾ ಪೃಥ್ವಿತತ್ವ
ಜಲತತ್ವ
ತೇಜೋತತ್ವ ಅಥವಾ ಅಗ್ನಿತತ್ವ
ವಾಯುತತ್ವ
ಆಕಾಶತತ್ವ...
ಇವು ಪಂಚತತ್ವಗಳು.
ನಕ್ಷತ್ರಗಳೂ ಸಹ ತತ್ವ ಪ್ರಧಾನವಾಗಿವೆ. ಪ್ರತಿ ನಕ್ಷತ್ರವೂ ಒಂದಲ್ಲ ಒಂದು ತತ್ವಕ್ಕೆ ಸೇರಿದವಾಗಿದೆ. ಇವುಗಳ ಪ್ರಭಾವವು ಸದಾ ಭೂಮಿಯ ಜೀವಿಗಳ ಮೇಲಾಗುವುದರಿಂದ ಆಯಾ ತತ್ವದ ಪ್ರಭಾವಕ್ಕನುಸಾರವಾಗಿ ವ್ಯಕ್ತಿತ್ವವನ್ನು ಹೇಗೆ ರೂಪಿಸಿಕೊಳ್ಳಬೇಕು ಹಾಗೂ ಯಾವ ಕಾರಣದಿಂದ ರೋಗಗಳು ಭಾಧಿಸಬಹುದೆಂದು ತಿಳಿಯಲು ಅನುಕೂಲವಾಗುತ್ತದೆ. ವಿಶೇಷವಾಗಿ ಪ್ರಶ್ನಾಶಾಸ್ತ್ರದಲ್ಲಿ ಕಳವು/ಸಾವು ಇತ್ಯಾದಿಗಳ ವಿಷಯಕ್ಕೆ ಸಂಬಂಧಿಸಿದಂತೆ ತಿಳಿಯಬಹುದು. ಏಕತತ್ವ ಗ್ರಹಗಳು ಸ್ವನಕ್ಷತ್ರದಲ್ಲಿದ್ದಾಗ ಅವುಗಳಿಗೆ ಸಂಬಂಧಿಸಿದ ತತ್ವಗುಣಗಳು ವೃದ್ಧಿಸುತ್ತದೆ. ಹಾಗೂ ವಿವಾಹಕ್ಕೆ ಸಂಬಂಧಿಸಿದಂತೆ ವಧೂವರರ ಸಾಲಾವಳಿ ಯನ್ನು ನೋಡುವಾಗ ತತ್ವಗಳಿಂದಲೂ ಹೊಂದಾಣಿಕೆ ಮಾಡಬಹುದು.
" ಚಾತುರ್ವಣ್ಯಂ ಮಯಾ ದೃಷ್ಠ್ಯಮ್ ಗುಣಕರ್ಮ ವಿಭಾಗಶಃ" ಎನ್ನುವಂತೆ ಜಾತಿಯು ಗುಣಧರ್ಮಗಳನ್ನು ಸೂಚಿಸುತ್ತದೆ.
ಈ ದಿಸೆಯಲ್ಲಿ ನಕ್ಷತ್ರಗಳ ಜಾತಿಯು ಈ ಕೆಳಕಂಡಂತೆ ಇದೆ.
ಇವು ತ್ವರಿತವಾಗಿ ಫಲಕೊಡುತ್ತದೆ.
ಇವು ಕಾರ್ಯಗಳಲ್ಲಿ ಭಯವನ್ನುಂಟು ಮಾಡುತ್ತದೆ.
ಮಂದ ಗತಿಯಲ್ಲಿ ಅಂದ್ರೆ ನಿಧಾನವಾಗಿ ಫಲಕೊಡುತ್ತವೆ.
ಇವು ಘೋರ ಫಲಗಳನ್ನು ಕೊಡುತ್ತದೇ.
ಹೆಸರಿನಂತೆಯೇ ಸಾಧಾರಣ ಫಲಗಳನ್ನು ಕೊಡುತ್ತದೆ.
ಇವು ಶಾಶ್ವತವಲ್ಲದ ಚಂಚಲ ಫಲವನ್ನುಂಟುಮಾಡುತ್ತದೆ.
ಇವು ಶಾಶ್ವತ ಫಲವನ್ನುಂಟು ಮಾಡುತ್ತವೆ.
ನಂತರದ ಏಳು ನಕ್ಷತ್ರ ಗಳು ಅರ್ಧ ಜೀವ ನಕ್ಷತ್ರಗಳು.
ನಂತರದ ಒಂದು ನಕ್ಷತ್ರ ಮೃತನಕ್ಷತ್ರ
ಮತ್ತು ನಂತರದ 8 ನಕ್ಷತ್ರಗಳು ಪೂರ್ಣಜೀವ ವಿರುವ ನಕ್ಷತ್ರಗಳು. ಹಾಗೂ ನಂತರದ ನಕ್ಷತ್ರಗಳು ಪಾದ ಜೀವವಿರುವ ನಕ್ಷತ್ರಗಳು.
ವೈನಾಶಿಕವೆಂದರೆ ನಾಶ ಮಾಡುವುದೆಂದು. ಅರ್ಥವಾಗುತ್ತದೆ. ಅಂದರೆ ಈ ನಕ್ಷತ್ರಗಳಲ್ಲಿ ಯಾವುದೇ. ಶುಭ ಕೆಲಸಗಳನ್ನು ಮಾಡಬಾರದು.
ಇದರಲ್ಲಿ,
ಕರ್ಮಸಂಜ್ಞೆ, ಸಾಮುದಾಯಿಕ, ವಿನಾಶ, ಹಾಗೂ ಮಾನಸ ಎಂಬ ನಾಲ್ಕು ವಿಭಾಗಗಳಿವೆ.
ಇವುಗಳ ಎಣಿಕೆಯಲ್ಲಿ ಪ್ರತಿಯೊಂದೂ ಜನ್ಮಲಗ್ನವನ್ನು ಆಧರಿಸುತ್ತಿರುತ್ತದೆ ಅಂದರೆ ಜನ್ಮ ಲಗ್ನ ನಕ್ಷತ್ರದಿಂದಲೇ ಎಣಿಸಬೇಕು.
ಜನ್ಮ ಲಗ್ನ ನಕ್ಷತ್ರದಿಂದ ಹತ್ತನೇ ನಕ್ಷತ್ರವು ಕರ್ಮಸಂಜ್ಞೆ -- ಅಂದರೆ ಯಾವುದೇ ರೀತಿಯಾದ ಕರ್ಮ ಮಾಡಲೂ ಸಹ ಈ ನಕ್ಷತ್ರವು ನಿಷಿದ್ಧ.
ಜನ್ಮ ಲಗ್ನ ನಕ್ಷತ್ರದಿಂದ 16 ನೆ ನಕ್ಷತ್ರವು ಸಾಂಘಿಕ -- ಸಮುದಾಯದಲ್ಲಿ, ಸಾರ್ವಜನಿಕರ ಹಿತಕ್ಕಾಗಿ ಮಾಡುವ ಕೆಲಸಗಳಿಗೆ ನಿಷಿದ್ಧ.
ಜನ್ಮ ಲಗ್ನ ನಕ್ಷತ್ರದಿಂದ 23 ನೆ ನಕ್ಷತ್ರವು ವಿನಾಶ--- ಮಾಡುವ ಕಾರ್ಯಕ್ಕೆ ವಿಘ್ನಗಳನ್ನು ತಂದೊಡ್ಡಿ ನಾಶಮಾಡುತ್ತದೆ.
ಜನ್ಮ ಲಗ್ನ ನಕ್ಷತ್ರದಿಂದ 25 ನೇ ನಕ್ಷತ್ರವು ಮಾನಸ -- ಪ್ರತಿ ಕೆಲಸಗಳನ್ನು ನಿರ್ವಹಿಸಲು ಇರಬೇಕಾದ ಮಾನಸಿಕ ಸ್ಥಿತಿಯನ್ನೇ ಹಾಳುಮಾಡುತ್ತದೇ.
ವೃದ್ಧಿಯಾಗಬೇಕಾದ ಕೆಲಸಗಳಿಗೆ ಸೃಷ್ಟಿ ನಕ್ಷತ್ರವನ್ನೂ, ಮಾಡಿದ ಕೆಲಸವು ಮುಂದಿನ ತಲೆಮಾರಿಗೂ ಉಳಿಯುವಂತೆ ಮಾಡಬೇಕಾದ ಕೆಲಸಗಳಿಗೆ ಸ್ಥಿತಿ ನಕ್ಷತ್ರಗಳನ್ನೂ, ಹಳೆಯ ಕೆಲಸ ಮುಗಿದು ಹೊಸ ಕೆಲಸದ ಪ್ರಾರಂಭಕ್ಕೆ ಲಯ ನಕ್ಷತ್ರವನ್ನೂ ಉಪಯೋಗಿಸ ಬೇಕು.
ಹಾಗಾದರೆ ಈ ನಕ್ಷತ್ರ ಗಳಾವುವು ತಿಳಿಯೋಣ ಬನ್ನಿ...
ದಿಕ್ಕುಗಳು ಎಂಟು ಎಂದು ನಮ್ಮ ಪ್ರಾಜ್ಞರಾದ ಋಷಿಗಳು ಗುರುತಿಸಿರುತ್ತಾರೆ.
ಈಶಾನ್ಯ, ಆಗ್ನೇಯ, ನೈಋತ್ಯ ಮತ್ತು ವಾಯುವ್ಯ.
ಇವುಗಳಿಗೆ ಅನುಸಾರವಾಗಿ....
ಕೃತಿಕಾ, ರೋಹಿಣಿ, ಮೃಗಶಿರ -- ಕೇಂದ್ರ ಅಥವಾ ಮದ್ಯಭಾಗ.
ಆರಿದ್ರ, ಪುನರ್ವಸು, ಪುಷ್ಯ, -- ಪೂರ್ವ
ಆಶ್ಲೇಷ, ಮಖಾ, ಪುಬ್ಬ -- ಆಗ್ನೇಯ
ಉತ್ತರ , ಹಸ್ತ, ಚಿತ್ತ. -- ದಕ್ಷಿಣ
ಸ್ವಾತಿ, ವಿಶಾಖ, ಅನೂರಾಧ -- ನೈಋತ್ಯ
ಜ್ಯೇಷ್ಠ, ಮೂಲ, ಪೂರ್ವಾಷಾಢ -- ಪಶ್ಚಿಮ
ಉತ್ತರಾಷಾಢ, ಶ್ರವಣ ಧನಿಷ್ಠ -- ವಾಯುವ್ಯ
ಶತಭಿಷ, ಪೂರ್ವಾಬಾದ್ರ, ಉತ್ತರಾಬಾದ್ರ -- ಉತ್ತರ
ರೇವತಿ, ಆಶ್ವಿನಿ, ಭರಣಿ. -- ಈಶಾನ್ಯ
ನಕ್ಷತ್ರಗಳ ಬಗ್ಗೆ ಅಧ್ಯಯನ
ಜ್ಯೇಷ್ಠ ಸೊಂಟದ ಬಲಭಾಗ
ಶುಭಗ್ರಹಗಳ ಸಂಯೋಗ, ಶುಭದೃಷ್ಟಿ ಇತ್ಯಾದಿಗಳು ಜಾತಕದಲ್ಲಿದ್ದರೆ ದೋಷವು ಪರಿಣಾಮಕಾರಿಯಾಗುವುದಿಲ್ಲ.
ಭರಣಿ. 2 ನೇ ಪಾದ
ಚಿತ್ತ. 2 ನೇ ಪಾದ
ವಿಶಾಖ 4 ನೇ ಪಾದ
ಕೃತಿಕಾ 3 ನೇ ಪಾದ
ರೋಹಿಣಿ 1, 4 ನೇ ಪಾದ
ಮೃಗಶಿರ. 1 ನೇ ಪಾದ
ಪುಷ್ಯ. 1 ನೇ ಪಾದ
ಮಖಾ. 2 ನೇ ಪಾದ
ಉತ್ತರ 2 ನೇ ಪಾದ
ಹಸ್ತ. 3, 4 ನೇ ಪಾದ
ಅನುರಾಧ 3 ನೇ ಪಾದ
ಜ್ಯೇಷ್ಠ 3, 4 ನೇ ಪಾದ
ಮೂಲ 2 3 ನೇ ಪಾದ
ಉತ್ತರಾಷಾಢ 2 ನೇ ಪಾದ
ಧನಿಷ್ಠ. 2 ನೇ ಪಾದ
ಶತಭಿಷ. ನಾಲ್ಕೂ ಪಾದಗಳು
ಉತ್ತರಾಬಾದ್ರ. 4 ನೇ ಪಾದ
ಇನ್ನು ತ್ರಿಪಾದಿ ನಕ್ಷತ್ರಗಳಾದ. ಕೃತಿಕಾ, ಪುನರ್ವಸು, ಉತ್ತ ರ ವಿಶಾಖ, ಉತ್ತರಾಷಾಢ, ಪೂರ್ವಾಬಾದ್ರ ನಕ್ಷತ್ರಗಳಲ್ಲಿ, ಪೂರ್ವಾಬಾದ್ರ ವೊಂದನ್ನು ಬಿಟ್ಟು ಉಳಿದ ನಕ್ಷತ್ರಗಳಲ್ಲಿ ಮೃತರಾದರೆ, ಮೃತಸ್ಥಳವನು 3 ತಿಂಗಳುಗಳ ಕಾಲ ಬಿಡಬೇಕು.( ಪೂರ್ವಾಬಾದ್ರ ನಕ್ಷತ್ರವು ಪಂಚಕ ನಕ್ಷತ್ರಗಳಲ್ಲಿ ಸೇರುತ್ತದೆ.)
ಪ್ರತಿಯೋಂದು ಕಾರ್ಯದಲ್ಲಿ. ತಾರಾಬಲವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಜನನ ನಕ್ಷತ್ರಕ್ಕೆ ಸಂಭಂಧಿಸಿದಂತೆ ಯಾವ ನಕ್ಷತ್ರಗಳಲ್ಲಿ ಯಾವ ಫಲ ಉಂಟಾಗುತ್ತದೆ ಎಂದು ನೋಡಿದಾಗ.....
ನಮ್ಮ ಪ್ರಾಜ್ಞರಾದ ಮಹಾಮುನಿಗಳು ಗುರುತಿಸಿರುವಂತೆ 9 ರೀತಿಯಾದ ತಾರಾಬಲವು ಇರುತ್ತದೆ.
1, ಜನ್ಮತಾರೆ
2, ಸಂಪತ್ ತಾರೆ
3, ವಿಪತ್ ತಾರೆ
4, ಕ್ಷೇಮ ತಾರೆ
5, ಪ್ರತ್ಯಕ್ ತಾರೆ
6, ಸಾಧನ ತಾರೆ
7, ನೈಧನ ತಾರೆ ( ವಧ ತಾರೆ)
8, ಮಿತ್ರತಾರೆ
9, ಅತಿಮಿತ್ರ ತಾರೆ ( ಪರಮ ಮಿತ್ರ ತಾರೆ)
ಈ ತಾರೆಗಳಲ್ಲಿ. 2, 4, 6, 8 ನೆ ತಾರೆಗಳು ಶುಭವೆಂದೂ, ಉಳಿದವು ಅಶುಭವೆಂದೂ, 9 ನೆ ತಾರೆಯಾದ ಅತಿಮಿತ್ರ ತಾರೆ ಸಂದರ್ಭಾನುಸಾರ ಶುಭವೆಂತಲೂ ಪರಿಗಣಿಸಲಾಗಿದೆ.
ಈ ರೀತಿಯಾಗಿ ಮುಂದುವರೆಯುತ್ತದೆ.
ಹೆಣ್ಣಾದರೆ 4 ನೇ ಪಾದ ಗಂಡನ ಅಣ್ಣನಿಗೆ ಹಾನಿ.
ಉತ್ತರ ನಕ್ಷತ್ರಕ್ಕೆ 2 ತಿಂಗಳು, ಪುಷ್ಯನಕ್ಷತ್ರಕ್ಕೆ 3 ತಿಂಗಳು, ಚಿತ್ತಕ್ಕೆ 6 ತಿಂಗಳು, ಜ್ಯೇಷ್ಠ ನಕ್ಷತ್ರಕ್ಕೆ ಒಂದು ವರ್ಷ ನಾಲ್ಕು ತಿಂಗಳು, ಪೂರ್ವಾಷಾಡಕ್ಕೆ 8 ತಿಂಗಳು, ಆಶ್ಲೇಷ ನಕ್ಷತ್ರಕ್ಕೆ 9 ತಿಂಗಳು, ಮೂಲ ನಕ್ಷತ್ರಕ್ಕೆ 9 ತಿಂಗಳು ದೋಷವನ್ನುಂಟು ಮಾಡುವ ಕಾಲವಾಗಿರುತ್ತದೆ.
ವಿಶೇಷವಾಗಿ ಸೋದರ ಮಾವಂದಿರಿಗೆ ದೋಷವೆಂದು ನಮೂದಿಸಿರುವ ವಿಷಯದಲ್ಲಿ ಯಾವದಿನ ಅಷ್ಟಮಿ ತಿಥಿಯಲ್ಲಿ ರೋಹಿಣಿ ನಕ್ಷತ್ರ ಬರುತ್ತದೋ ಆ ದಿನಗಳಲ್ಲಿ ಮಾತ್ರ ದೋಷಪ್ರದವಾಗಿರುತ್ತದೆ.
ಇಂದಿನ ವಿಜ್ಞಾನದ ಪ್ರಕಾರ ನಕ್ಷತ್ರಗಳು ನಿರ್ಜೀವ, ಅಗಾಧ ಗಾತ್ರದ ಬೆಂಕಿಯ ಉಂಡೆಗಳು, ಇದು ಮಾನವನ ಜೀವಿತದ ಮೇಲೆ ಪರಿಮಾಣ ಬೀರುವ ಸಾಧ್ಯತೆ ಇಲ್ಲ ಎನ್ನುತ್ತದ.ೆ
ನಕ್ಷತ್ರಗಳ ಬಗೆಗೆ ಅಧ್ಯಯನ
ಶ್ರೀ ಗಣೇಶಾಯ ನಮಃ
ಶ್ರೀ ಗುರುಭ್ಯೋನಮಃ
ಬಗೆಗಿನ ಅಧ್ಯಯನ ಆಮೂಲಾಗ್ರವಾಗಿ ಎಷ್ಟರಮಟ್ಟಿಗೆ ಮಾಡಿರುತ್ತೇವೆಯೋ ಆ ಮಟ್ಟದಲ್ಲಿ ನಿಖರವಾದ ಫಲ ನಿರೂಪಣೆಗೆ ಸಹಕಾರಿ ಯಾಗುತ್ಯದೆ.
ಆದ್ದರಿಂದ ಈ ಮಾರ್ಗದಲ್ಲಿ ನಕ್ಷತ್ರಗಳ ಬಗೆಗೆ ತಿಳಿದುಕೊಳ್ಳೋಣ........
ಅವುಗಳೆಂದರೆ......
ಆಶ್ವಿನಿ
ಭರಣಿ
ಕೃತಿಕಾ
ರೋಹಿಣಿ
ಮೃಗಶಿರ
ಆರಿದ್ರ
ಪುನರ್ವಸು
ಪುಷ್ಯ
ಆಶ್ಲೇಷ
ಮಖಾ
ಪುಬ್ಬ
ಉತ್ತರ
ಹಸ್ತ
ಚಿತ್ತ
ಸ್ವಾತಿ
ವಿಶಾಖ
ಅನುರಾಧ
ಜ್ಯೇಷ್ಠ
ಮೂಲ
ಪೂರ್ವಾಷಾಢ
ಉತ್ತರಾಷಾಢ
ಶ್ರವಣ
ಧನಿಷ್ಠ
ಶತಭಿಷ
ಪೂರ್ವಾಬಾದ್ರ
ಉತ್ತರಾಬಾದ್ರ
ರೇವತಿ...
27 ನಕ್ಷತ್ರವೆಂದು ಗುರುತಿಸಿರುವುದು ನಕ್ಷತ್ರಗಳ ಒಂದೊಂದು ಸಮೂಹ .ಅಥವಾ ಗುಂಪನ್ನೇ ಹೊರತು , ಒಂದು ನಕ್ಷತ್ರವನ್ನಲ್ಲ. ನಿದರ್ಶನವಾಗಿ ನೋಡಿದಾಗ ಕ್ರಮವಾಗಿ ನಕ್ಷತ್ರ ಹಾಗೂ. ಅವುಗಳು ಹೊಂದಿರುವ ನಕ್ಷತ್ರಗಳ ಸಂಖ್ಯೆ ಹೀಗಿದೆ...
ಭರಣಿ ----------------- 3
ಕೃತಿಕಾ ----------------6
ರೋಹಿಣಿ -------------5
ಮೃಗಶಿರ -------------3
ಆರಿದ್ರ ----------------1
ಪುನರ್ವಸು -----------5
ಪುಷ್ಯ ------------------3
ಆಶ್ಲೇಷ ----------------೬
ಮಖಾ ----------------೫
ಪುಬ್ಬ ------------------4
ಉತ್ತರ ----------------4
ಹಸ್ತ --------------------5
ಚಿತ್ತ ------------------- 1
ಸ್ವಾತಿ. ----------------1
ವಿಶಾಖ --------------5
ಅನುರಾಧ ----------6
ಜ್ಯೇಷ್ಠ. ----------------3
ಮೂಲ ---------------6
ಪೂರ್ವಾಷಾಢ -----4
ಉತ್ತರಾಷಾಢ ------4
ಶ್ರವಣ ----------------೩
ಧನಿಷ್ಠ ----------------4
ಶತಭಿಷ ----------- 100
ಪೂರ್ವಾಬಾದ್ರ ---- 4
ಉತ್ತರಾಬಾದ್ರ ---- ೪
ರೇವತಿ ---------------೩೨
ನಿಮಿಷವನ್ನು ಪುನಃ ನಾಲ್ಕು ಭಾಗ ಮಾಡಿದಾಗ 3°-20' ವು ನಕ್ಷ್ಟ್ರತ್ರದ ಒಂದು ಪಾದವಾಗುತ್ತದೆ. ನಕ್ಷತ್ರಗಳು 27
ಪಾದಗಳು 4 ... ಇವುಗಳನ್ನು ಗುಣಿಸಿದಾಗ
ಚಂದ್ರನು ನಕ್ಷತ್ರದ ಒಂದು ಪಾದದಲ್ಲಿ ಸುಮಾರು 6 ರಿಂದ 6 1/4 ಗಂಟೆಗಳ ಕಾಲ ಇರುತ್ತಾನೆ.
ಭರಣಿ ನಕ್ಷತ್ರದ 4 ಪಾದಗಳು. 13° - 20'
ಕೃತಿಕಾ ನಕ್ಷತ್ರದ ಒಂದು ಪಾದ. 3° - 20'
----------------
ಒಟ್ಟು. 30° ಗಳು
ಭಚಕ್ರದ ಎರಡನೇ ರಾಶಿಯಾದ ವೃಷಭದಲ್ಲಿ
ರೋಹಿಣಿ ನಕ್ಷತ್ರದ ನಾಲ್ಕು ಪಾದಗಳು13° - 20'
ಮೃಗಶಿರ ನಕ್ಷತ್ರದ ಎರಡು ಪಾದಗಳು 6° -- 40'
-----------------
ಒಟ್ಟು. 30° ಗಳು
ಆರಿದ್ರ ದ ನಾಲ್ಕು ಪಾದಗಳು 13° 20'
ಪುನರ್ವಸುವಿನ ಮೂರು ಪಾದಗಳು10°- 00
------------------
ಒಟ್ಟು 30° ಗಳು
ಪುಷ್ಯಾದ ನಾಲ್ಕು ಪಾದಗಳು. 13°- 20'
ಆಶ್ಲೇಷದ ನಾಲ್ಕು ಪಾದಗಳು 13° - ೨0'
--------------------
ಒಟ್ಟು 30° ಗಳು
ಪುಬ್ಬ ನಕ್ಷತ್ರಡ ನಾಲ್ಕು ಪಾದಗಳು. 13° -- 20'
ಉತ್ತರ ನಕ್ಷತ್ರದ ಒಂದು ಪಾದ. 3° -- 20"
- -------------------
ಓಟ್ಟು 30° ಗಳು
ಹಸ್ತ ನಕ್ಷತ್ರದ ನಾಲ್ಕು ಪಾದಗಳು. 13° --20'
ಚಿತ್ತ ನಕ್ಷತ್ರದ ಎರಡು ಪಾದಗಳು 6° -- 40'
-------------------
ಒಟ್ಟು 30° ಗಳು
ಸ್ವಾತಿ ನಕ್ಷತ್ರದ ನಾಲ್ಕು ಪಾದಗಳು 13°-- 20'
ವಿಶಾಖ ನಕ್ಷತ್ರದ 3 ಪಾದಗಳು. 10°--00
- ---------------------
ಒಟ್ಟು. 30° ಗಳು
ಅನುರಾಧ ನಕ್ಷತ್ರದ ನಾಲ್ಕು ಪಾದಗಳು 13°-- 20'
ಜೇಷ್ಠ ನಕ್ಷತ್ರದ ನಾಲ್ಕು ಪಾದಗಳು. 13°--20'
---------------------
ಒಟ್ಟು. 30° ಗಳು
ಪೂ.ಷಾಢ ನಕ್ಷತ್ರದ ನಾಲ್ಕು ಪಾದಗಳು. 13° --20'
ಉ. ಷಾಢ ನಕ್ಷತ್ರದ ಒಂದು ಪಾದ. 3° -- 20'
----------------------
ಒಟ್ಟು. 30 ° ಗಳು
ಭಚಕ್ರದ ಹತ್ತನೇ ರಾಶಿಯಾದ ಮಕರದಲ್ಲಿ
ಶ್ರವಣ ನಕ್ಷತ್ರದ ನಾಲ್ಕು ಪಾದಗಳು. 13°-- 20'
ಧನಿಷ್ಠ ನಕ್ಷತ್ರ ದ ಎರಡು ಪಾದಾಗಳು. 6° -- ೪0"
---------------------
ಒಟ್ಟು 30° ಗಳು
ಶತಭಿಷ ನಕ್ಷತ್ರದ ನಾಲ್ಕು ಪಾದಗಳು. 13°- 20'
ಪೂ.ಬಾದ್ರ ನಕ್ಷತ್ರದ ಮೂರು ಪಾದಗಳು 10°--00
--------------------
ಒಟ್ಟು 30° ಗಳು
ಉ.ಬಾದ್ರ ದ ನಾಲ್ಕು ಪಾದಗಳು. 13° -- 20'
ರೇವತಿ ನಕ್ಷತ್ರದ ನಾಲ್ಕು ಪಾದಗಳು 13° --20'
--------------------
ಒಟ್ಟು 30° ಗಳು
ಹೀಗೆ 12 ರಾಶಿಗಳಲ್ಲಿ 108 ಪಾದಗಳನ್ನು ಹಂಚಲಾಗಿದೆ.
ಹಾಗಾಗಿ ಈ ನಕ್ಷತ್ರಗಳ ಬಗೆಗೆ ಹಂತ ಹಂತವಾಗಿ ತಿಳಿಯಲು ಪ್ರಯತ್ನಿಸೋಣ.
( ಧರ್ಮ, ಅರ್ಥ, ಕಾಮ, ಮೋಕ್ಷ ನಕ್ಷತ್ರಗಳು)
Friday, 8 November 2024
ವೃಷಭ ಲಗ್ನ ( ರಾಶಿ )
ಜ್ಯೋತಿಷ್ಯ ಶಾಸ್ತ್ರದಲ್ಲಿ, ನಮ್ಮ ಋಷಿಮುನಿಗಳು ತಮ್ಮ ಆಳವಾದ ಅಧ್ಯಯನ ಹಾಗೂ ತಪಸ್ಸಿನ ಮೂಲಕ ರಾಶಿಗಳು 12 ಎಂದು ಕಂಡುಕೊಂಡಿದ್ದಾರೆ, ಅದೇ ಅಲ್ಲದೆ ಪ್ರತಿ ರಾಶಿಗೂ ಸಂಬಂದಿಸಿದಂತೆ ವಿಶಿಷ್ಟವಾದ ಗುಣಧರ್ಮಗಳನ್ನು ಹೇಳಿರುತ್ತಾರೆ. ಭಚಕ್ರದಲ್ಲಿ ಈ ಪ್ರಕಾರವಾಗಿ ನೋಡಿದಾಗ ಹನ್ನೆರಡು ರಾಶಿಗಳು ಕ್ರಮವಾಗಿ ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನಸ್ಸು, ಮಕರ, ಕುಂಭ, ಮೀನಾ ಎಂಬ ಹೆಸರಿನಿಂದ ಪ್ರಖ್ಯಾತಿ ಆಗಿದೆ, ಜಾತಕದಲ್ಲಿ ಇದನ್ನೇ ಕುಂಡಲಿ ಎನ್ನುತ್ತಾರೆ.
ವೃತ್ತಾಕಾರದ ಭಚಕ್ರದ ವ್ಯಾಪ್ತಿಯು 360° ಗಳಾಗಿದ್ದು, ಇದನ್ನು ಕ್ರಮವಾಗಿ ಹನ್ನೆರಡು ಮನೆಗಳಿಗೆ ಹಂಚಿದಾಗ...
360÷12= 30° ಗಳಾಗುತ್ತದೆ.
ಇನ್ನೊಂದು ರೀತಿಯಲ್ಲಿ ಅರ್ಥೈಸಿದಾಗ...........
ಸೂರ್ಯ, ಚಂದ್ರ ಮತ್ತು ಭೂಮಿ ಒಂದೇ ಸರಳ ರೇಖೆಯಲ್ಲಿ ಬಂದಾಗ ಅಮಾವಾಸ್ಯೆ ಆಗುತ್ತೆ, ಇದನ್ನು ಪ್ರಾರಂಭದ ಬಿಂದುವನ್ನಾಗಿ ಗುರ್ತಿಸಿದರೆ, ಇಲ್ಲಿಂದ ಭೂಮಿ ಮತ್ತು ಚಂದ್ರರು ತಮ್ಮದೇ ಆದ ವೇಗದಲ್ಲಿ ಚಲಿಸುತ್ತಾ ತಮ್ಮ ಪಥದಲ್ಲಿ ಮುಂದುವರಿಯುವರು. ಹೀಗೇ ಚಲಿಸುವಾಗ ಮತ್ತೆ ಮತ್ತೆ ಸೂರ್ಯ ಚಂದ್ರ ಮತ್ತು ಭೂಮಿಗಳು ಒಂದೇ ಸರಳ ರೇಖೆಯಲ್ಲಿ ಸೇರಿ ಅಮವಾಸ್ಯೆಯನ್ನು ಉಂಟುಮಾಡುವುವು, ಹೀಗೆ ವರ್ಷದಲ್ಲಿ ಅಥವಾ 360°ಗಳ ಧೀರ್ಘ ವೃತ್ತದ ಚಲನೆಯಲ್ಲಿ 12 ಅಮಾವಾಸ್ಯೆಗಳು ಉಂಟಾಗುತ್ತವೆ. ಒಂದು ಅಮಾವಾಸ್ಯೆ ಯಿಂದ ಮತ್ತೊಂದು ಅಮಾವಾಸ್ಯೆಯ ಅಂತರ 30°ಗಳು ಆಗುತ್ತವೆ. ಇದನ್ನೇ ಜ್ಯೋತಿಶಾಸ್ತ್ರದಲ್ಲಿ ರಾಶಿ ಎಂದು ಕರೆಯುತ್ತಾರೆ..
ಹಾಗಾಗಿ, ಪ್ರಾಪಂಚಿಕ ವಿಷಯಗಳಿಗೆ ಭೂತತ್ವ ಕೇಂದ್ರವಾಗಿದೆ, ಅಂದರೆ ಅಧಿಕಾರ, ಅಂತಸ್ತು, ಗೌರವ ಪಡೆಯುವುದು, ಈ ರಾಶಿಯವರು ಬೇಗ ಎಲ್ಲರೊಡನೆ ಬೆರೆಯೋದಿಲ್ಲ, ಸಂಶಯಾಸ್ಪದ ಸ್ವಭಾವ, ವಿಮರ್ಶಾತ್ಮಕ ದೃಷ್ಟಿಯಿಂದ ಆಲೋಚಿಸಿ ನಿರ್ಣಯಿಸುವುದೇ ಭೂತತ್ವದ ವಿಶೇಷ, ಬಡಪಟ್ಟಿಗೆ ಸೋಲನ್ನೊಪ್ಪದ ಸ್ವಭಾವ, ಶ್ರಮಪಡದೇ ಜೀವನ ನಡೆಸುವವರು, ಯಾವುದನ್ನು ಬೇಡದೆನ್ನದಿರುವ ಸ್ವಭಾವ, ಸಮಯಕ್ಕೆ ತಕ್ಕಂತೆ ಹೊಂದಿಕೊಳ್ಳುವವರು, ಹೇಗಾದರೂ ಸುಖಪಡಬೇಕೆಂಬ ಛಲ, ಮಾನವ ಜನ್ಮ ಬಂದಿರುವುದೇ ಪೂರ್ವಪುಣ್ಯ ವಿಶೇಷವೆಂದು ತಿಳಿದು ಎಲ್ಲಾ ಸುಖವನ್ನು ಅನುಭವಿಸಲು ಹಾತೊರೆಯುತ್ತಾರೆ, ಈ ರಾಶಿಯವರು ಸಾಮಾನ್ಯವಾಗಿ ಪ್ರಾಮಾಣಿಕರು, ಮತ್ತು ಮೊಂಡು ಸ್ವಭಾವದವರು, ಸಹನಾಶೀಲರು, ವೈಯಕ್ತಿಕ ಸಂಬಂಧದಲ್ಲಿ ಪ್ರಾಮಾಣಿಕತೆಯನ್ನು ಬಯಸುವ ಸಭ್ಯ ವಿಶ್ವಾಸಾರ್ಹ ವ್ಯಕ್ತಿಗಳಾಗಿರುತ್ತಾರೆ.
ವೃಷಭ ಲಗ್ನದಲ್ಲಿ ಹುಟ್ಟಿದವರು ವಿಶಾಲವಾದ ಹಣೆಯುಳ್ಳವರೂ, ಸ್ಥೂಲವಾದ ತುಟಿಯುಳ್ಳವರೂ, ಉಬ್ಬಿದ ಕೆನ್ನೆಗಳುಳ್ಳವರೂ ಆಗಿರುತ್ತಾರೆ. ಅವರಿಗೆ ಶರೀರದಲ್ಲಿ ಶೀತ, ವಾತ ಧಾತುಗಳೇ ಅಧಿಕ. ಉದಾರ ಗುಣವುಳ್ಳವರೂ, ಸಮಯ ಬಿದ್ದರೆ ಯಾರ ಲಂಗು ಲಗಾಮು ಇಲ್ಲದೇ ಖರ್ಚು ಮಾಡುವ ಜನ ಇವರು. ಇವರಿಗೆ ಅಲ್ಪ ಪುತ್ರ ಸಂತಾನ ಇರುತ್ತದೆ. ಸ್ತ್ರೀ ಸಂತತಿ ಅಧಿಕವಾಗಿರುತ್ತದೆ. ತಂದೆ ತಾಯಿಗಳಿಂದ ದೂರವಾಗಿರುವವರೂ, ಧರ್ಮ ಕಾರ್ಯಗಳಲ್ಲಿ ತೊಡಗಿ ದ್ರವ್ಯಾರ್ಜನೆ ಮಾಡ ತಕ್ಕವರೂ ಆಗಿರುತ್ತಾರೆ ವೃಷಭ ರಾಶಿಯವರು ಸಾಮಾನ್ಯವಾಗಿ ಹಣ ಮತ್ತು ಆಸ್ತಿಯನ್ನು ಇಷ್ಟಪಡುತ್ತಾರೆ. ಅದರ ಗಳಿಕೆಗಾಗಿ ಸಾಕಷ್ಟು ಶ್ರಮ ಪಡುತ್ತಾರೆ. . ವಿಶ್ವಾಸಾರ್ಹ ವರ್ತನೆ, ಕಠಿಣ ಪರಿಶ್ರಮ, ತಾಳ್ಮೆ, ಸೂಕ್ತ ಹೊಂದಾಣಿಕೆ ಹಾಗೂ ಸ್ನೇಹಪರ ವರ್ತನೆ ಇವರ ಉತ್ತಮ ಗುಣ. ಈ ಲಗ್ನದವರು ಡೌನ್ ಟು ಅರ್ಥ್ ಅಂಥ ಹೇಳಬಹುದು, ಎಲ್ಲರನ್ನು ಗೌರವದಿಂದ ಕಾಣುವುದರಿಂದ ಹಿಡಿದು, ಎಲ್ಲರ, ಎಲ್ಲ ಕೆಲಸವನ್ನು ಜವಾಬ್ದಾರಿಯಿಂದ ಎತ್ತಿನ ತರಹ ತಮ್ಮ ಹೆಗಲ ಮೇಲೆ ಹೊತ್ತು ಮಾಡುತ್ತಾರೆ. ಕೈಗೆತ್ತಿಕೊಂಡಿರುವ ಕೆಲಸ ಮುಗಿಯುವವರೆಗೂ ಛಲದಿಂದ ಕೆಲಸ ಮಾಡುತ್ತಾರೆ, ಕೆಲಸ ಮುಗಿದ ನಂತರ ಸುಧೀರ್ಘ ವಿಶ್ರಾಂತಿ ಪಡೆಯುತ್ತಾರೆ. ಇವರು ಒಮ್ಮೊಮ್ಮೆ ಸೋಮಾರಿಗಳೂ ಆಗುತ್ತಾರೆ.
ಶುಕ್ರಗ್ರಹದ ಅಧಿಪತ್ಯವಿರುವ ಈ ರಾಶಿಯವರು ಕಲೋಪಾಸನೆಯ ಆರಾಧಕರು. ಅತ್ಯುತ್ಸಾಹಿಗಳು ಮತ್ತು ತಾವು ಮಾಡುವ ಪ್ರತಿ ಕೆಲಸಕ್ಕೂ ತಮ್ಮ ಹೃನ್ಮನಗಳನ್ನೂ ಅರ್ಪಿಸಬಲ್ಲವರು. ಲಾಲಿತ್ಯ ಮತ್ತು ಲಾವಣ್ಯದ ಮೂರ್ತರೂಪವಾಗಿರುವ ಇವರು ತಮ್ಮ ಇಷ್ಟಸಾಧನೆಗಾಗಿ ಮನಸ್ಸಿಟ್ಟು ಶ್ರಮಿಸಬಲ್ಲರು. ಗಾಂಭಿರ್ಯವೇ ಇವರ ಸಹಜ ಗುಣವಾದರೂ ಅತಿ ಸರಳ ಮತ್ತು ಸಹೃದಯ ಮನೋಭಾವದವರು, ಹಾಗೂ ಅತ್ಯಂತ ಉದಾರಿಗಳೂ ಆಗಿರುತ್ತಾರೆ.
ಪರೋಪಕಾರವೂ ತಾರ್ಕಿಕತೆಯೂ ಮೇಳೈಸಿದ ಅಪರೂಪದ ವ್ಯಕ್ತಿತ್ವ. ಉತ್ಸಾಹ, ಉನ್ಮಾದಗಳ ಕಾರಣದಿಂದ ಇವರ ರೀತಿಗಳು ಗೊಂದಲಕಾರಿಯಾಗಿಯೂ, ಅವ್ಯವಸ್ತಿತವಾಗಿಯೂ ತೋರಿದರೂ ಇವರು ವಾಸ್ತವದಲ್ಲಿ ವ್ಯವಸ್ಥೆಯ ರೂವಾರಿಗಳು ಹಾಗೂ ಸರ್ವ ಸ್ವತಂತ್ರರು. ಇವರು ತಾವು ಅಂದುಕೊಂಡ ಏನನ್ನಾದರೂ ಸಾಧಿಸಬಲ್ಲ ಸಾಮರ್ಥ್ಯವುಳ್ಳವರಾಗಿರುತ್ತಾರೆ
ಈ ಲಗ್ನಕ್ಕೆ ಗುರು, ಚಂದ್ರರಿಂದ ಅಶುಭ ಫಲ. ರವಿ-ಶನಿ ಶುಭ ಫಲ ಕೊಡುತ್ತಾರೆ. ಈ ಲಗ್ನಕ್ಕೆ ಶನಿ ಮಾತ್ರ ರಾಜಯೋಗಕರ. ಈ ಲಗ್ನಕ್ಕೆ ನವಮ ಮತ್ತು ದಶಮ ಸ್ಥಾನಗಳ ಅಧಿಪತಿಯು ಶನಿ. ಧರ್ಮ ಕರ್ಮಾಧಿಪತಿಯಾದ ಶನಿದೇವ ಪ್ರಚಂಡ ರಾಜಯೋಗವನ್ನು ಕೊಡುತ್ತಾನೆ. ವೃಷಭ ಲಗ್ನಕ್ಕೆ ನಾಲ್ಕನೆಯ ಸ್ಥಾನದ ಅಧಿಪತಿಯು ರವಿ. ರವಿಯು ಅಶುಭ ಗ್ರಹವಾದರೂ ಕೇಂದ್ರಾಧಿಪತಿಯಿರುವುದರಿಂದ ಶುಭ ಫಲದಾಯಕನಾಗುವನು. ಅಷ್ಟಮ ಮತ್ತು ಏಕಾದಶ ಸ್ಥಾನಗಳ ಅಧಿಪತಿಯು ಗುರು. ತೃತೀಯ ಸ್ಥಾನದ ಅಧಿಪತಿ ಚಂದ್ರ. ಪಷ್ಟ , ತೃತೀಯ, ಅಷ್ಟಮ, ದ್ವಾದಶ ಈ ಸ್ಥಾನಗಳು ಅಶುಭ ಸ್ಥಾನಗಳು, ಈ ಸ್ಥಾನಾಧಿಪತಿಗಳು ಈ ಲಗ್ನಕ್ಕೆ ಶುಭಫಲ ಕೊಡುವುದಿಲ್ಲ.
ಈ ಲಗ್ನದಲ್ಲಿ ಹುಟ್ಟಿದವರಿಗೆ 10ನೇ ಸ್ಥಾನ ಕುಂಭ. ಇದರ ಅಧಿಪತಿ ಶನಿ. ಇದರಿಂದ ಇವರಿಗೆ ವ್ಯವಸಾಯದಲ್ಲಿ ಆಸಕ್ತಿ ಇರುತ್ತದೆ. ಇವರು ಆಸ್ತಿ ಪಾಸ್ತಿಯ ವಿಷಯದಲ್ಲಿ ಲಾಭ ಗಳಿಸುತ್ತಾರೆ. ಇವರು ಹಣಕಾಸಿನ ಸಂಸ್ಥೆ ಮಾಡಿದರೆ ಲಾಭ ಬರುತ್ತದೆ. ಇವರು ಶಂಗಾರ ಸಾಧನಗಳಾದ ಬೆಳ್ಳಿ, ಬಂಗಾರ ವ್ಯಾಪಾರದಲ್ಲಿ ಲಾಭ ಗಳಿಸುತ್ತಾರೆ. ಇವರು ಉನ್ನತ ವ್ಯಾಸoಗ ಅಂದರೆ ಐ.ಎ.ಎಸ್. ಅಧಿಕಾರಿಯಾಗುಬಹುದು ರಾಜಕೀಯದಲ್ಲೂ ಸ್ಥಾನಮಾನ ಗಳಿಸುವ ಯೋಗ ಇರುತ್ತೆ. ಯಾವುದೇ ಕೆಲಸದಲ್ಲಾದರೂ ಸೂಕ್ತ ನಿರ್ವಹಣೆಯನ್ನು ಕೈಗೊಳ್ಳುವ ಇವರಿಗೆ ಉದ್ಯೋಗಗಳು, ಕೃಷಿ, ಬ್ಯಾಂಕ್ ಕೆಲಸ, ಕಲೆ, ಪಾಕಶಾಲೆಗೆ (ಹೋಟೆಲ್ ಗೆ) ಸಂಬಂಧಿಸಿದಂತಹ ವೃತ್ತಿಗಳಲ್ಲಿ ಹೆಚ್ಚಿನ ಯಶಸ್ಸನ್ನು ಕಾಣುವರು.
ಇವರಿಗೆ ಒಳ್ಳೆಯ ಮಕ್ಕಳು ಹುಟ್ಟುತ್ತಾರೆ. ಈ ಲಗ್ನದವರಿಗೆ ಶುಕ್ರವಾರ, ಬುಧವಾರ, ಶನಿವಾರ ಒಳ್ಳೆಯ ವಾರ. ಇವರ ಅದೃಷ್ಟ ಸಂಖ್ಯೆ 5, 6, 8. ಅದೃಷ್ಟದ ಹರಳು ನೀಲ, ಪಚ್ಚೆ, ವಜ್ರ. ಉಪಯೋಗಿಸಬೇಕಾದ ಬಣ್ಣಗಳು ಹಸಿರು, ಬಿಳುಪು ಮತ್ತು ತಿಳಿಗೆಂಪು. ಇವಿಷ್ಟೂ ವೃಷಭ ಲಗ್ನವಾದಾಗಿನ ಫಲಗಳು.
.ವೃಷಭರಾಶಿ ಅಷ್ಟಮ ಭಾವವಾದಾಗ:---
| ★ಮಾನವ ವ್ಯವಹಾರಗಳ ಮೇಲೆ ಗ್ರಹಗಳ ಪ್ರಭಾವ |
| ★ಹಿಂದೂ ಜ್ಯೋತಿಷ್ಯದ ಕೈಪಿಡಿ |
| ★ಮುನ್ನೂರು ಪ್ರಮುಖ ಸಂಯೋಜನೆಗಳು |
| ★ಜಾತಕವನ್ನು ಹೇಗೆ ನಿರ್ಣಯಿಸುವುದು (2 ಸಂಪುಟಗಳಲ್ಲಿ) |
| ★ಹಿಂದೂ ಭವಿಷ್ಯ ಹೇಳುವ ಜ್ಯೋತಿಷ್ಯ |
| ★ಆರಂಭಿಕರಿಗಾಗಿ ಜ್ಯೋತಿಷ್ಯ |
| ★ಗ್ರಹ ಮತ್ತು ಭಾವ ಬಲಗಳು |
| ★ಪ್ರಶ್ನ ತಂತ್ರ (ಹೋರಾರಿ ಜ್ಯೋತಿಷ್ಯ)-ಬಿವಿ ರಾಮನ್ ಅನುವಾದಿಸಿದ್ದಾರೆ |
| ★ಅಷ್ಟಕವರ್ಗ ಮುನ್ಸೂಚನೆ ವ್ಯವಸ್ಥೆ |
| ★ಹಿಂದೂ ಜ್ಯೋತಿಷ್ಯ ಮತ್ತು ಪಶ್ಚಿಮ |
| ಹವಾಮಾನ ಮತ್ತು ಭೂಕಂಪಗಳನ್ನು ಊಹಿಸುವಲ್ಲಿ ಜ್ಯೋತಿಷ್ಯ |
| ★ಜ್ಯೋತಿಷ್ಯದಲ್ಲಿ ನನ್ನ ಅನುಭವಗಳು |
| ★ವರ್ಷಫಲ್ ಅಥವಾ ಹಿಂದೂ ಪ್ರಗತಿಯ ಜಾತಕ |
| ★ಭಾವಾರ್ಥ ರತ್ನಾಕರ |
| ★ಜ್ಯೋತಿಷ್ಯಶಾಸ್ತ್ರದ ಕ್ಯಾಟೆಕಿಸಂ |
| ★ಮುಹೂರ್ತ (ಚುನಾವಣಾ ಜ್ಯೋತಿಷ್ಯ) |
| ★ಗಮನಾರ್ಹ ಜಾತಕಗಳು |
| ★ಜೈಮಿನಿ ಜ್ಯೋತಿಷ್ಯದಲ್ಲಿ ಅಧ್ಯಯನ |
| ★ಪ್ರಶ್ನ ಮಾರ್ಗ (2 ಸಂಪುಟಗಳಲ್ಲಿ)-ಹೊರರಿ ಜ್ಯೋತಿಷ್ಯದ ಅನುವಾದ ಇಂತಹ ಅದ್ಭುತ ಜ್ಯೋತಿಷ್ಯ ಶಾಸ್ತ್ರದ ಗ್ರಂಥಗಳನ್ನು ಬರೆದ B.V.ರಾಮನ್ ಸರ್ ಹುಟ್ಟಿದ್ದು ವೃಷಭರಾಶಿಯಲ್ಲಿಯೇ. ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅನೇಕ ವಿದ್ವನ್ಮಣಿಗಳು, ದಾರ್ಶನಿಕರು, ಕವಿಗಳು, ವೃಷಭರಾಶಿಯಲ್ಲಿ ಹುಟ್ಟಿದ್ದಾರೆ. ಡಾ: B. N ಶೈಲಜಾ ರಮೇಶ್ |



